Monday 28 November 2011

ಅಪರೂಪದ ಮೋಹನ್ಕುಮಾರ್

ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಅಂತ ತೆಗೆದಿಡೋದು ಉಂಟು. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ವ್ಯಾಪಾರಿಗಳೂ ಇಂಥ ಕೆಲಸ ಮಾಡೋದನ್ನು ಕೇಳಿದ್ದೇವೆ. ಕೊಡಗಿನ ಕುಶಾಲನಗರದಲ್ಲಿರೋ ಮನುಪ್ರೆಸ್ ಮಾಲಿಕ ಮೋಹನ್ ಕುಮಾರ್ ಈ ಥರದ ಅಪರೂಪದ ವ್ಯಕ್ತಿ. ಹೋದ ವಾರ ಕುಶಾಲನಗರಕ್ಕೆ ಹೋದಾಗ ಮೋಹನ್ ಕುಮಾರ್ ಅವರ ಸಾಮಾಜಿಕ ಕಳಕಳಿಯನ್ನ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅದು `ಕಲಾಮೇಳ'
ಪ್ರತಿವರ್ಷ ನವೆಂಬರ್ ತಿಂಗಳ ಒಂದು ಶನಿವಾರ ಈ `ಕಲಾಮೇಳ' ನಡೆಯುತ್ತೆ. ಅದು ಪ್ರೌಢ ಶಾಲಾ ಮಕ್ಕಳಿಗೋಸ್ಕರ ನಡೆಯುವ ಜಿಲ್ಲಾಮಟ್ಟದ ಸ್ಪಧರ್ೆ. ಅಲ್ಲಿ ರಂಗೋಲಿ, ಪ್ರಬಂಧ, ಚಿತ್ರಕಲೆ, ಸಮೂಹನೃತ್ಯ ಮತ್ತು ಭರತನಾಟ್ಯ ಸ್ಪಧರ್ೆ ಇರುತ್ತೆ. ಅದರಲ್ಲೂ ಪ್ರಬಂಧ ಸ್ಪಧರ್ೆಗೆ ಸ್ಥಳದಲ್ಲೇ ವಿಷಯ ಕೊಡಲಾಗುತ್ತೆ. ಪ್ರಬಂಧಕ್ಕೆ ವಿಷಯ ನಿರ್ಧರಿಸುವವರೂ ಸ್ವತ: ಮೋಹನ್ಕುಮಾರ್ ಅವರೇ. ಈ ವರ್ಷ ನಡೆದಿದ್ದು 13ನೇ ವರ್ಷದ ಕಲಾಮೇಳ ! ಮಕ್ಕಳೇ ಇಲ್ಲಿ ಉದ್ಘಾಟಕರು. ಯಾವುದೇ ಭಾಷಣದ ಅಬ್ಬರ ಇರೋಲ್ಲ. ಒಂದಿಡೀ ದಿನ ಮಕ್ಕಳದ್ದೇ ಸಾಮ್ರಾಜ್ಯ ! ಆರಂಭದಿಂದ ಇಲ್ಲಿವರೆಗೂ ಸ್ಪಧರ್ೆಯ ವಿಭಾಗಗಳು ಬದಲಾಗಿಲ್ಲ. ಆದ್ರೆ ಭಾಗವಹಿಸುವವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತನೇ ಇದೆ. ಎಲ್ಲರಿಗೂ ಮಧ್ಯಾಹ್ನ ರುಚಿಕಟ್ಟಾದ ಊಟದ ವ್ಯವಸ್ಥೆ ಇರುತ್ತೆ. ಭಾಗವಹಿಸಿದವರಿಗೆಲ್ಲಾ ಪ್ರಥಮ, ದ್ವಿತೀಯ ಸೇರಿ ಒಂದಲ್ಲಾ ಒಂದು ರೀತಿಯ ಬಹುಮಾನವೂ ಕೊಡ್ತಾರೆ. ಎಲ್ಲಾ ಸೇರಿದರೆ ಹತ್ತಿರ ಹತ್ತಿರ ಒಂದೂವರೆ ಲಕ್ಷ ರೂಪಾಯಿ ಖಚರ್ಾಗುತ್ತೆ. ಇದು ಮೋಹನ್ಕುಮಾರ್ ತಮ್ಮ ಸ್ವಂತ ಜೇಬಿನಿಂದ ತೆಗೆದು ಕೊಡೋ ಹಣ !
`ಆಹಾರ ಅಪವ್ಯಯ ತಡೆಗಟ್ಟಿ ಅಭಿಯಾನ' ಇದು ಮೋಹನ್ಕುಮಾರ್ ಅವರ ಮತ್ತೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಊಟದ ತಟ್ಟೆಯಲ್ಲಿ ಒಂದಗಳು ಬಿಟ್ಟು ಎದ್ದರೂ ಮೋಹನ್ಕುಮಾರ್ ಅವರಿಗೆ ಸಹಿಸೋಕ್ಕೆ ಆಗೋಲ್ಲ. ಇದನ್ನೇ ಅವ್ರು ಒಂದು ಅಭಿಯಾನವನ್ನಾಗಿ ಶುರು ಮಾಡಿದಾರೆ. ಆಹಾರ ಬೆಳೆಯೋದಿಕ್ಕೆ ರೈತರು ಪಡೋ ಕಷ್ಟ ಮತ್ತು ಒಂದು ಹೊತ್ತಿನ ಊಟಕ್ಕೂ ಕೆಲವರು ಪರದಾಡೋ ಪರಿಯನ್ನ ಮೋಹನ್ಕುಮಾರ್ ಮನಮುಟ್ಟೋ ಹಾಗೆ ವಿವರಿಸೋ ಕರಪತ್ರ ಪ್ರಿಂಟ್ ಮಾಡ್ಸಿದಾರೆ. ಅದನ್ನ ಶಾಲಾಕಾಲೇಜುಗಳ ಮಕ್ಕಳಿಗೆ ಹಂಚ್ತಾರೆ. ಕಲ್ಯಾಣಮಂಟಪಗಳಿಗೆ ಹೋಗಿ ಬ್ಯಾನರ್ ಕಟ್ತಾರೆ. ಏನಾದ್ರು ಕಾರ್ಯಕ್ರಮಗಳು ನಡೀತ್ತಿದ್ದ್ರೆ ಅಲ್ಲಿಗೂ ಹೋಗಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಾರೆ. ಇಲ್ಲೂ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ರೂಪಾಯಿ ಕೈಬಿಟ್ಟು ಹೋಗುತ್ತೆ. ಅದೂ ಅವರ ಸ್ವಂತ ದುಡ್ಡು.
ಮೋಹನ್ ಕುಮಾರ್ ಅವ್ರ ಇಂಥ ಕೆಲಸ ಹೊರ ಜಗತ್ತಿಗೆ ಗೊತ್ತೇ ಆಗೋಲ್ಲ. ಏಕಂದ್ರೆ ಅವ್ರು ಎಲ್ಲರ ಹಾಗೆ ಪ್ರಚಾರ ಬಯಸೋ ವ್ಯಕ್ತಿ ಅಲ್ಲ. ಇಂಥವರ ಸಂತತಿ ಸಾವಿರ ಆಗಲಿ...



Saturday 19 November 2011

Thursday 3 November 2011

ಜಾವಾ ಬೈಕ್
















ಕೊಡಗು, ಅದ್ರಲ್ಲೂ ಭಾಗಮಂಡಲದಂಥ ಪ್ರದೇಶದಲ್ಲಿ ಮಳೆ ಒಂಥರ ಬೆನ್ನು ಬಿಡದ ಬೇತಾಳ ಇದ್ದ ಹಾಗೆ. ಭಾಗಮಂಡಲದಲ್ಲಂತೂ ಒಮ್ಮೆ ಮಳೆ ಶುರು ಆಯ್ತು ಆಂದ್ರೆ, ಎಷ್ಟು ಹೊತ್ತಿಗೆ ನಿಲ್ಲುತ್ತಪ್ಪ ಅನ್ನೋ ಹಾಗೆ ಇರುತ್ತೆ. ಬರೀ ಮಳೆ ಆದ್ರೆ ಪರ್ವಾಗಿಲ್ಲ. ಅದ್ರ ಜೊತೆ ಜೋರು ಗಾಳಿ, ಮೂಳೆಯನ್ನೇ ಕೊರೆಯೋ ಚಳಿ. ಈಗ್ಲೇ ಈ ತರ ಆದ್ರೆ ಇನ್ನೊಂದು 30-40 ವರ್ಷಗಳ ಹಿಂದೆ, ಕಾಡುಗಳು ದಟ್ಟವಾಗಿದ್ದ ಸಮಯದಲ್ಲಿನ ಪರಿಸ್ಥಿತಿ ಹೇಗೆ ಇದ್ದಿರ್ಬಹುದು, ಯೋಚನೆ ಮಾಡಿ.... ಇಂಥ ವಾತಾವರಣದಲ್ಲೂ ಆಗಿನ ಬೈಕ್ಗಳು ಒಂದೇ ಕಿಕ್ನಲ್ಲಿ ಸ್ಟಾಟರ್್ ಆಗ್ತಿದ್ವು. ಅದು ಈಗಿನ ಜಮಾನದ ಸ್ಟೈಲಿಷ್ ಬೈಕ್ಗಳಲ್ಲ...`ಜಾವಾ' ಬೈಕ್
ನಾನು ನಡಿಲಿಕ್ಕೆ ಕಲಿತಾಗ್ಲೇ ನಮ್ಮ ಅಪ್ಪ 3 ಚಕ್ರದ ಸೈಕಲ್ ಕೊಡ್ಸಿದ್ದ್ರು. (ಈಗ ಅದ್ರ ಚಕ್ರಗಳು ಮಾತ್ರ ಇವೆ... ಬಾಲ್ಯದ ನೆನಪಿಗೆ) ಆದ್ರೆ ನನಗೆ ಸೈಕಲ್ ಮೇಲೆ ಆಸಕ್ತಿನೇ ಇರ್ಲಿಲ್ಲ. ನನ್ನ ಕಣ್ಣು ಏನಿದ್ರೂ ಬೈಕ್ ಮೇಲೆನೆ. ನನ್ನ ಭಾಗಮಂಡಲದಲ್ಲಿ ಆಗ ಇದ್ದಿದ್ದೇ ನಾಲ್ಕು ಬೈಕ್ಗಳು. ಅವೂ ಜಾವಾ ಬೈಕ್ಗಳು. ತಲಕಾವೇರಿಯ ನಾರಾಯಣ ಆಚಾರ್, ನನ್ನ ದೋಸ್ತ್ ಪ್ರವೀಣನ ಅಪ್ಪ ವಿಠಲಾಚಾರ್, ಕುದುಪಜೆ ಪಳಂಗಪ್ಪ ಮತ್ತೆ ನಮ್ಮ ಹೆಡ್ಮಿಸ್ ಆಗಿದ್ದ ಗೀತಾಬಾಯಿ ಮೇಡಂ ಪತಿ ಸೋಮಶೇಖರ್ ನಾಯಕ್ ಬೈಕ್ ಇಟ್ಕೊಂಡಿದ್ದವ್ರು. ಜೋರು ಶಬ್ದದಿಂದಾಗಿ, ಜಾವಾ ಬೈಕ್ ಬರೋದು ತುಂಬಾ ದೂರದಿಂದ್ಲೇ ಗೊತ್ತಾಗಿಬಿಡ್ತಿತ್ತು. ನಾನು ರಸ್ತೆ ಬದಿಗೆ ಬಂದು ಆ ಬೈಕ್, ಅದರ ಸವಾರನ ಗತ್ತು ಕಣ್ತುಂಬಿಸಿಕೊಳ್ತಿದ್ದೆ. ಪ್ರವೀಣ್ ಅವ್ನ ಅಪ್ಪನ ಬೆನ್ನಿಗೆ ಅಂಟಿ ಕೂತು ಬೈಕ್ನಲ್ಲಿ ಹೋಗ್ತಿದ್ದರಂತೂ, ನನಗೂ ಬೈಕ್ ಸವಾರಿಯ ಆಸೆ ಬಂದು ಬಿಡ್ತಿತ್ತು. ಆಗೆಲ್ಲಾ ಮನೆಲಿದ್ದ ಕುಚರ್ಿ ಮೇಲೆ ಉಲ್ಟಾ ಕೂತು, ಬಾಯಿಯಲ್ಲಿ ಬೈಕ್ ತರ ಶಬ್ದ ಮಾಡ್ಕೊಂಡು, ಓಡಿಸಿದ ಹಾಗೆ ನಾಟಕ ಮಾಡಿ ತೃಪ್ತಿಪಟ್ಟುಕೊಳ್ತಿದ್ದೆ. ಇಲ್ಲಾಂದ್ರೆ ನನ್ನ ಮೂರು ಚಕ್ರದ ಸೈಕಲೇ ಬೈಕ್ ಆಗಿಬಿಡ್ತಿತ್ತು. ಹೋದ ತಿಂಗಳು ನನ್ನ ಟಿವಿಎಸ್ ವಿಕ್ಟರ್ ಬೈಕ್ನಲ್ಲಿ ಭಾಗಮಂಡಲಕ್ಕೆ ಹೋಗಿದ್ದೆ. ಅಲ್ಲಿ ನಮ್ಮ ಅಂಕಲ್ ಅಂಗಡೀಲಿ ಕೂತಿರ್ಬೇಕಾದ್ರೆ ಇದೆಲ್ಲಾ ನೆನಪಿಗೆ ಬಂತು.
ಈಗ ದುಡ್ಡು ತೆಗೆದುಕೊಂಡು ಶೋರೂಂಗೆ ಹೋದ ಕೂಡ್ಲೇ ಹೊಸ ಬೈಕ್ ತರ್ತೀವಲ್ಲಾ... ಆದ್ರೆ ಜಾವಾ ಬೈಕ್ ಹಾಗಲ್ಲ, ಬುಕ್ ಮಾಡಿ ವರ್ಷಗಟ್ಟಲೆ ಕಾಯಬೇಕಿತ್ತು. ಬೈಕ್ ಫ್ಯಾಕ್ಟರಿ ಇದ್ದಿದ್ದು, ನಮ್ಮ ಮೈಸೂರಿನಲ್ಲೇ... 1961ರಲ್ಲಿ ಶುರುವಾಗಿದ್ದು. ವರ್ಷಕ್ಕೆ 42 ಸಾವಿರ ಬೈಕ್ಗಳನ್ನ ತಯಾರಿಸೋ ಸಾಮಥ್ರ್ಯ ಈ ಫ್ಯಾಕ್ಟರಿಗೆ ಇತ್ತು. 36 ಸಾವಿರ ಬೈಕ್ಗಳನ್ನ ರೆಡಿ ಮಾಡ್ತಿದ್ದ್ರು. ಭಾರತದ ಎಲ್ಲಾ ಕಡೆಗೆ ಇಲ್ಲಿಂದಲೇ ಸಪ್ಲೈ ಆಗ್ತಿತ್ತು. ಜೆಕೋಸ್ಲೋವಾಕಿಯಾ ದೇಶ ಭಾರತಕ್ಕೆ ಬೈಕ್ ತಯಾರಿಸೋದು ಹೇಗೆ ಅನ್ನೋದನ್ನ 1968ರ ತನಕ ಹೇಳಿಕೊಡ್ತು. ನಂತರ ನಮ್ಮವರೇ ಬೈಕ್ ತಂತ್ರಜ್ಞಾನ ಕಲಿತುಕೊಂಡ್ರು. ಜಾವಾ ಅನ್ನೋ ಹೆಸರಲ್ಲಿ ರೆಡಿಯಾಗ್ತಿದ್ದ ಬೈಕ್ ಆಮೇಲೆ `ಯಜ್ಡಿ' ಆಯ್ತು. ಆದ್ರೂ ಆ ಬೈಕನ್ನ ಎಲ್ಲರೂ ಕರೀತ್ತಿದ್ದಿದ್ದು, `ಜಾವಾ' ಬೈಕ್ ಅಂತನೇ... 6 ತರದ ಬೈಕ್ಗಳನ್ನ ಯಜ್ಡಿ ಕಂಪೆನಿ ತಯಾರು ಮಾಡ್ತಿತ್ತು. ಲೂನಾ ಕಾನ್ಸೆಪ್ಟ್ ಕೊಟ್ಟಿದ್ದೇ `ಯಜ್ಡಿ ಕೋಲ್ಟ್' ಅನ್ನೋ ಬೈಕ್.
ಯಜ್ಡಿ ಬೈಕ್ಗಳು ಆವತ್ತು ವರ್ಷಕ್ಕೆ ಎಷ್ಟು ಸಂಖ್ಯೇಲಿ ರಸ್ತೆಗೆ ಬರ್ತಿತ್ತೊ, ಇವತ್ತು ಅಷ್ಟೇ ಸಂಖ್ಯೇಲಿ ಬೇರೆ ಬೇರೆ ಕಂಪೆನಿಗಳ ಬೈಕ್ಗಳು ಪ್ರತಿ ದಿನ ಮಾರಾಟ ಆಗ್ತಿವೆ. ಆದ್ರೆ, ಆ ಯಜ್ಡಿ ಬೈಕ್ನ ಮಜಾ ಮತ್ತೆ ಸವಾರಿಯ ಗತ್ತು ಮಾತ್ರ ಈಗಿನ ಈ ಬೈಕ್ಗಳಲ್ಲಿ ಸಿಗೋದು ಕಷ್ಟ