Monday 28 November 2011

ಅಪರೂಪದ ಮೋಹನ್ಕುಮಾರ್

ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಅಂತ ತೆಗೆದಿಡೋದು ಉಂಟು. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ವ್ಯಾಪಾರಿಗಳೂ ಇಂಥ ಕೆಲಸ ಮಾಡೋದನ್ನು ಕೇಳಿದ್ದೇವೆ. ಕೊಡಗಿನ ಕುಶಾಲನಗರದಲ್ಲಿರೋ ಮನುಪ್ರೆಸ್ ಮಾಲಿಕ ಮೋಹನ್ ಕುಮಾರ್ ಈ ಥರದ ಅಪರೂಪದ ವ್ಯಕ್ತಿ. ಹೋದ ವಾರ ಕುಶಾಲನಗರಕ್ಕೆ ಹೋದಾಗ ಮೋಹನ್ ಕುಮಾರ್ ಅವರ ಸಾಮಾಜಿಕ ಕಳಕಳಿಯನ್ನ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅದು `ಕಲಾಮೇಳ'
ಪ್ರತಿವರ್ಷ ನವೆಂಬರ್ ತಿಂಗಳ ಒಂದು ಶನಿವಾರ ಈ `ಕಲಾಮೇಳ' ನಡೆಯುತ್ತೆ. ಅದು ಪ್ರೌಢ ಶಾಲಾ ಮಕ್ಕಳಿಗೋಸ್ಕರ ನಡೆಯುವ ಜಿಲ್ಲಾಮಟ್ಟದ ಸ್ಪಧರ್ೆ. ಅಲ್ಲಿ ರಂಗೋಲಿ, ಪ್ರಬಂಧ, ಚಿತ್ರಕಲೆ, ಸಮೂಹನೃತ್ಯ ಮತ್ತು ಭರತನಾಟ್ಯ ಸ್ಪಧರ್ೆ ಇರುತ್ತೆ. ಅದರಲ್ಲೂ ಪ್ರಬಂಧ ಸ್ಪಧರ್ೆಗೆ ಸ್ಥಳದಲ್ಲೇ ವಿಷಯ ಕೊಡಲಾಗುತ್ತೆ. ಪ್ರಬಂಧಕ್ಕೆ ವಿಷಯ ನಿರ್ಧರಿಸುವವರೂ ಸ್ವತ: ಮೋಹನ್ಕುಮಾರ್ ಅವರೇ. ಈ ವರ್ಷ ನಡೆದಿದ್ದು 13ನೇ ವರ್ಷದ ಕಲಾಮೇಳ ! ಮಕ್ಕಳೇ ಇಲ್ಲಿ ಉದ್ಘಾಟಕರು. ಯಾವುದೇ ಭಾಷಣದ ಅಬ್ಬರ ಇರೋಲ್ಲ. ಒಂದಿಡೀ ದಿನ ಮಕ್ಕಳದ್ದೇ ಸಾಮ್ರಾಜ್ಯ ! ಆರಂಭದಿಂದ ಇಲ್ಲಿವರೆಗೂ ಸ್ಪಧರ್ೆಯ ವಿಭಾಗಗಳು ಬದಲಾಗಿಲ್ಲ. ಆದ್ರೆ ಭಾಗವಹಿಸುವವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತನೇ ಇದೆ. ಎಲ್ಲರಿಗೂ ಮಧ್ಯಾಹ್ನ ರುಚಿಕಟ್ಟಾದ ಊಟದ ವ್ಯವಸ್ಥೆ ಇರುತ್ತೆ. ಭಾಗವಹಿಸಿದವರಿಗೆಲ್ಲಾ ಪ್ರಥಮ, ದ್ವಿತೀಯ ಸೇರಿ ಒಂದಲ್ಲಾ ಒಂದು ರೀತಿಯ ಬಹುಮಾನವೂ ಕೊಡ್ತಾರೆ. ಎಲ್ಲಾ ಸೇರಿದರೆ ಹತ್ತಿರ ಹತ್ತಿರ ಒಂದೂವರೆ ಲಕ್ಷ ರೂಪಾಯಿ ಖಚರ್ಾಗುತ್ತೆ. ಇದು ಮೋಹನ್ಕುಮಾರ್ ತಮ್ಮ ಸ್ವಂತ ಜೇಬಿನಿಂದ ತೆಗೆದು ಕೊಡೋ ಹಣ !
`ಆಹಾರ ಅಪವ್ಯಯ ತಡೆಗಟ್ಟಿ ಅಭಿಯಾನ' ಇದು ಮೋಹನ್ಕುಮಾರ್ ಅವರ ಮತ್ತೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಊಟದ ತಟ್ಟೆಯಲ್ಲಿ ಒಂದಗಳು ಬಿಟ್ಟು ಎದ್ದರೂ ಮೋಹನ್ಕುಮಾರ್ ಅವರಿಗೆ ಸಹಿಸೋಕ್ಕೆ ಆಗೋಲ್ಲ. ಇದನ್ನೇ ಅವ್ರು ಒಂದು ಅಭಿಯಾನವನ್ನಾಗಿ ಶುರು ಮಾಡಿದಾರೆ. ಆಹಾರ ಬೆಳೆಯೋದಿಕ್ಕೆ ರೈತರು ಪಡೋ ಕಷ್ಟ ಮತ್ತು ಒಂದು ಹೊತ್ತಿನ ಊಟಕ್ಕೂ ಕೆಲವರು ಪರದಾಡೋ ಪರಿಯನ್ನ ಮೋಹನ್ಕುಮಾರ್ ಮನಮುಟ್ಟೋ ಹಾಗೆ ವಿವರಿಸೋ ಕರಪತ್ರ ಪ್ರಿಂಟ್ ಮಾಡ್ಸಿದಾರೆ. ಅದನ್ನ ಶಾಲಾಕಾಲೇಜುಗಳ ಮಕ್ಕಳಿಗೆ ಹಂಚ್ತಾರೆ. ಕಲ್ಯಾಣಮಂಟಪಗಳಿಗೆ ಹೋಗಿ ಬ್ಯಾನರ್ ಕಟ್ತಾರೆ. ಏನಾದ್ರು ಕಾರ್ಯಕ್ರಮಗಳು ನಡೀತ್ತಿದ್ದ್ರೆ ಅಲ್ಲಿಗೂ ಹೋಗಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಾರೆ. ಇಲ್ಲೂ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ರೂಪಾಯಿ ಕೈಬಿಟ್ಟು ಹೋಗುತ್ತೆ. ಅದೂ ಅವರ ಸ್ವಂತ ದುಡ್ಡು.
ಮೋಹನ್ ಕುಮಾರ್ ಅವ್ರ ಇಂಥ ಕೆಲಸ ಹೊರ ಜಗತ್ತಿಗೆ ಗೊತ್ತೇ ಆಗೋಲ್ಲ. ಏಕಂದ್ರೆ ಅವ್ರು ಎಲ್ಲರ ಹಾಗೆ ಪ್ರಚಾರ ಬಯಸೋ ವ್ಯಕ್ತಿ ಅಲ್ಲ. ಇಂಥವರ ಸಂತತಿ ಸಾವಿರ ಆಗಲಿ...



No comments: