Monday 19 December 2011

`ಕಂದಕ'


ಈಚೆಗೆ ಓದೋ ಹವ್ಯಾಸ ಕಡಿಮೆ ಆಗ್ತಿದೆ ಅನ್ನೋ ಮಾತಿದೆ. ಆದ್ರೆ, ಪುಸ್ತಕ ಮಾರಾಟ ಕಡಿಮೆ ಆಗಿಲ್ವಲ್ಲಾ ಅಂತ ವಾದ ಮಾಡುವವರೂ ಇದ್ದಾರೆ. ಎರಡೂ ನಿಜ. ಉದಹಾರಣೆಗೆ ನಾನೇ ಇದ್ದೀನಲ್ಲಾ.... ತಿಂಗಳಿಗೊಮ್ಮೆಯಾದ್ರೂ ಕೋರಮಂಗಲ ಸಪ್ನ ಬುಕ್ ಹೌಸ್ಗೆ ಹೋಗಿ ಹೊಸ ಪುಸ್ತಕಗಳನ್ನ ಖರೀದಿಸಿ ತಕ್ಕೊಂಡು ಬರ್ತೀನಿ.. ಆದ್ರೆ ಯಾಕೋ ಓದೋಕೇ ಮನಸ್ಸಾಗೋಲ್ಲ. ಮುನ್ನುಡಿ, ಬೆನ್ನುಡಿ ನೋಡಿ, ಮತ್ತೆ ಓದಿದ್ರೆ ಆಯ್ತು ಅಂತ ಇಟ್ಟುಬಿಡ್ತೀನಿ... ಆ `ಮತ್ತೆ' ಬರೋದೇ ಇಲ್ಲ. ಅಂಥದ್ರಲ್ಲಿ ಈಚೆಗೆ ಒಂದು ಪುಸ್ತಕ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯ್ತು. ಹೆಸ್ರು `ಕಂದಕ'
`ಕಂದಕ' ಕಣಿವೆ ಭಾರದ್ವಾಜ್ ಬರೆದಿರೋ ಕಾದಂಬರಿ. ಬಹುಶ: ಅದ್ರ ವಸ್ತು ಓದಿಸಿಕೊಂಡು ಹೋಯ್ತಾ ಅಥವಾ ಅವ್ರ ಬರವಣಿಗೆ ಶೈಲಿಯ ಅಂತ ಗೊತ್ತಿಲ್ಲ. ಆಫೀಸ್ನಿಂದ ರಾತ್ರಿ ರೂಂಗೆ ಬಂದಾಗ ಮಲಗೋ ಮೊದ್ಲು ಸುಮ್ನೆ `ಕಂದಕ'ದ ಮುನ್ನುಡಿ, ಬೆನ್ನುಡಿ ಮೇಲೆ ಕಣ್ಣಾಡಿಸಿದೆ. ಓದೋಣಂತ ಕೂತ್ಕೊಂಡೆ. ಓದಿ ಮುಗಿದ್ಮೆಲೆನೇ ಮಲಗಿದ್ದು!
ಕೊಡಗು ಜಿಲ್ಲೆಯನ್ನ ಯಾವೆಲ್ಲಾ ಸಮಸ್ಯೆಗಳು ಕಾಡುತ್ತಿವೆಯೋ ಅವೆಲ್ಲಾ `ಕಂದಕ'ಕಲ್ಲಿ ಕಾಣಿಸಿಕೊಂಡಿವೆ. ಮುಖ್ಯವಾಗಿ ಮಲೆನಾಡಿನ ಒಂದು ಹಳ್ಳಿಯಲ್ಲಿ ಬೆಳೆದ ಒಬ್ಬ ವಿದ್ಯಾವಂತ ಉದ್ಯೋಗಕ್ಕಾಗಿ ನಗರಕ್ಕೆ ಬರೋದು, ಅಲ್ಲಿ ಹೊಂದಿಕೊಳ್ಳೋದಿಕ್ಕೆ ಅವನ ಪರದಾಟ, ಮತ್ತೆ ಹುಟ್ಟೂರಿನ ಸೆಳೆತ ಇವೆಲ್ಲಾ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಕಾದಂಬರಿಯ ನಾಯಕ ನಟೇಶ ಒಬ್ಬ ಪತ್ರಕರ್ತ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿ, ಪತ್ರಿಕಾರಂಗಕ್ಕೆ ಬಂದವ್ನು. ಅದಕ್ಕೆ ಇರಬೇಕು ನನಗೆ `ಕಂದಕ' ಹಿಡಿಸಿದ್ದು ! ಆದ್ರೆ ಕಾದಂಬರಿಯ ಅಂತ್ಯ ನನಗೇಕೋ ಇಷ್ಟ ಆಗಿಲ್ಲ. ಭಾರದ್ವಾಜ್ ಅವ್ರಿಗೆ ಇದ್ನ ಹೇಳ್ಬೇಕೂಂತ ಇದ್ದೀನಿ.

No comments: