Saturday 12 May 2012

ನಾಲ್ಕುನಾಡು ಅರಮನೆ ಚಿತ್ರಪಯಣ...


890
ಕತ್ತಲೆ ಕೋಣೆಯ ಬಾಗಿಲು

ಮಹಡಿ ಮೇಲಿರುವ ರಾಜನ ದರ್ಬಾರ್ ಹಾಲ್

ಮಹಡಿ ಮೇಲಿನಿಂದ ಕಾಣುವ ಮದುವೆ ಮಂಟಪ

ಮಹಡಿಯ 'ಸೀಲಿಂಗ್'

ಸ್ನಾನದ ಕೋಣೆಯಲ್ಲಿ ದೀಪ  ಇಡುವ ಸ್ಥಳ

ಅರಮನೆಯ ಸ್ನಾನದ ಮನೆ

ಅರಮನೆಯ ಚಾವಡಿ

ಗೋಡೆಯ ಮೇಲಿನ ಚಿತ್ತಾರ
ನಾಲ್ಕುನಾಡು ಅರಮನೆಯ ದ್ವಾರ

ಗೋಡೆಯ ಮೇಲೆ ಚಿತ್ರಕಲೆ

ಮಹಡಿ 'ಸೀಲಿಂಗ್' ಮೇಲೆ ಮರದಲ್ಲಿ ಕಲೆ..

ಅರಮನೆಯ  ಎದುರಿನ ನೋಟ

ಅರಮನೆಯ ಮತ್ತೊಂದು ಚಿತ್ರ

ಮಹಡಿಗೆ ಹೋಗಲು ಮೆಟ್ಟಿಲುಗಳು

ಮಹಡಿಯಲ್ಲಿ ಇರುವ ಗುಪ್ತ ಕಿಟಕಿ. ಮುಖ್ಯದ್ವಾರದಲ್ಲಿ ಯಾರು ಬರ್ತಿದ್ದಾರೆ ಅನ್ನೋದು  ಇಲ್ಲಿಂದಲೇ ಕಾಣುತ್ತೆ

ಅರಮನೆಯ ಮುಖ್ಯ ದ್ವಾರದ ಬಾಗಿಲು

Thursday 22 December 2011

ಮಡಿಕೇರಿಯ ಅಶ್ವಿನಿ ಆಸ್ಪತ್ರೇಲಿ ಕಂಡಿದ್ದು...


ಇದು ಮಡಿಕೇರಿಯ ಅಶ್ವಿನಿ ಆಸ್ಪತ್ರೇಲಿ ಕಂಡಿದ್ದು. ಗಾಜಿನ ಬಾಟಲಿಗಳನ್ನ ಕಪಾಟಿನಲ್ಲಿ ಜೋಡಿಸಿ ಇಟ್ಟ ಹಾಗಿದೆಯಲ್ಲಾ... ಆದ್ರೆ, ಗ್ಲೂಕೋಸ್ನ ಖಾಲಿ ಬಾಟಲಿಗಳನ್ನೇ ಇಟ್ಟಿಗೆ ಹಾಗೆ ಬಳಸಿ ಇಲ್ಲಿ ಗೋಡೆ ಕಟ್ಟಲಾಗಿದೆ. ಇವು ಈ ಹಿಂದೆ ಬರ್ತಿದ್ದ ಗಾಜಿನ ಬಾಟಲಿಗಳು. ಹೇಗಿದೆ ಮರುಬಳಕೆ ? ಮಾದರಿ ಅನ್ನೊದಿಕ್ಕೆ ಅಡ್ಡಿ ಇಲ್ಲ. ಈಗ ಪ್ಲಾಸ್ಟಿಕ್ ಬಾಟಲ್ಗಳಲ್ಲಿ ಗ್ಲೂಕೋಸ್ ತುಂಬಿಸಿ ಮಾರಾತರ್ಾರೆ. ಖಾಲಿ ಆದ್ಮೇಲೆ ಅವು ಯಾವುದೇ ಉಪಯೋಗಕ್ಕೆ ಬರೋಲ್ಲ. ಸುಮ್ನೇ ಪರಿಸರ ಮಾಲಿನ್ಯ ಅಷ್ಟೇ...

Tuesday 20 December 2011

ಕೊಡಗಿನಲ್ಲಿ ಸಕಲೇಶಪುರದ ಕಿತ್ತಳೆ !




ಕುಶಾಲನಗರದಿಂದ ಮಡಿಕೇರಿಗೆ ಹೋಗುವ ರಸ್ತೆ ಬದೀಲಿ ಅಲ್ಲಲ್ಲಿ ಕಿತ್ತಳೆ ಹಣ್ಣು ಮಾರ್ತಿರೋದನ್ನ ಕಾಣ್ಬಹುದು. ಕೊಡಗಿನ ಕಿತ್ತಳೆ ಅಂತ ಅದನ್ನ ಖರೀದಿಸಿದ್ರೆ, ನೀವು ಮೋಸ ಹೋದ್ರಿ ಅಂತನೇ ಅರ್ಥ. ಏಕಂದ್ರೆ ಅಲ್ಲಿ ಮಾರೋದು ಕೊಡಗಿನ ಕಿತ್ತಳೆ ಅಲ್ಲ. ಅದು ಸಕಲೇಶಪುರದಿಂದ ತಂದು, ಇಲ್ಲಿ ಮಾರೋ ಕಿತ್ತಳೆ ! ಕಿತ್ತಳೆ ಖರೀದಿಗೆ ಕೊಡಗಿನವರು ಬಂದಿದ್ದಾರೆ ಅಂತಾದ್ರೆ, ನಿಜ ಹೇಳ್ತಾರೆ. ಅದೇ ದೂರದಿಂದ ಬಂದ ಪ್ರವಾಸಿಗರಾದ್ರೆ ಮೂರು ನಾಮ ! ಅಲ್ಲಿ ಕೊಡಗಿನ ಕಿತ್ತಳೆ ಸಿಗೋದಿಲ್ಲ, ಬದಲಿಗೆ ಸ್ಥಳೀಯವಾಗಿ ಬೆಳೆದ ಸಿಹಿಸಿಹಿ ಮೂಸಂಬಿ ಸಿಗುತ್ತೆ.
ಒಂದು ಕಾಲ ಇತ್ತು, ಕೊಡಗು ಅಂದ್ರೆ, ಕಿತ್ತಳೆಯಿಂದ ಗುರುತಿಸುತ್ತಿದ್ದ ಸಮಯ ಅದು. ಪಂ. ಜವಾಹರ್ ಲಾಲ್ ನೆಹರು ಕೊಡಗಿಗೆ ಬಂದಿದ್ದಾಗ ಇಲ್ಲಿನ ಕಿತ್ತಳೆಯ ರುಚಿ ಮತ್ತೆ ಹುಡುಗಿಯರ ಸೌಂದರ್ಯದ ಬಗ್ಗೆ ಹೊಗಳಿ ಮಾತಾಡಿದ್ದ್ರು. 1960ರ ಸುಮಾರಿಗೆ ಕೊಡಗಿನಲ್ಲಿ ಅಂದಾಜು 24 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಿತ್ತಳೆ ಬೆಳೆಯಲಾಗ್ತಿತ್ತು. ಈಗ ಅದು 1400 ಹೆಕ್ಟೇರ್ಗೆ ಬಂದು ನಿಂತಿದೆ. ಆಗೆಲ್ಲಾ ಒಂದು ಗಿಡದಲ್ಲಿ 60 ಕೆಜಿಯಷ್ಟು ಕಿತ್ತಳೆ ಫಸಲು ಬತರ್ಿತ್ತು. ಆದ್ರೆ ಈಗ 10 ಕೆಜಿಯೂ ಸಿಗ್ತಿಲ್ಲ. ಕಾಫಿಗಿಡದ ಮಧ್ಯೆ ಇರ್ತಿದ್ದ ಕಿತ್ತಳೆ ಗಿಡಗಳು ತೋಟದ ಸೌಂದರ್ಯ ಹೆಚ್ಚಿಸೋಕೆ ಕೂಡ ಸಹಾಯ ಆಗ್ತಿದ್ದ್ವು.
ಕೊಡಗಿನ ಕಿತ್ತಳೆಯ ರುಚಿಯೇ ತುಂಬಾ ವಿಶಿಷ್ಟ. ರುಚಿಯಲ್ಲಿ ಈ ಕಿತ್ತಳೆ ಬಿಟ್ಟರೆ, ನಾಗ್ಪುರದ ಕಿತ್ತಳೆ ಎರಡನೇ ಸ್ಥಾನದಲ್ಲಿ ನಿಲ್ಲುತ್ತೆ. ಕೊಡಗಿನ ಕಿತ್ತಳೆಯ ಸಿಪ್ಪೆ ತೆಳು. ನೀರಿನಂಶ ಜಾಸ್ತಿ. ಬಾಯಿಯಲ್ಲಿ ನೀರೂರಿಸೋ ಹುಳಿಮಿಶ್ರಿತ ಸಹಿ, ಇದರ ರುಚಿ. ದಶಕಗಳ ಹಿಂದೆ ಬಂದ ಕಟ್ಟೆರೋಗ, ಕೊಡಗಿನಲ್ಲಿ ಕಿತ್ತಳೆ ಬೆಳೆ ನಶಿಸೋ ಹಾಗೆ ಮಾಡ್ತು.
ಇತ್ತೀಚೆಗೆ ಕೊಡಗಿನ ಕಿತ್ತಳೆಗೆ ವಿಶೇಷ ಭೌಗೋಳಿಕ ಬೆಳೆಯ ಮಾನ್ಯತೆ ಸಿಕ್ಕಿದೆ. ಇದರ ಸಹಾಯದಿಂದ ಕೊಡಗಿನಲ್ಲಿ ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಕೃಷಿ ಮಿಷನ್ ನಲ್ವತ್ತೇಳೂವರೆ ಲಕ್ಷ ರೂಪಾಯಿಯ ಯೋಜನೆ ರೂಪಿಸಿದೆ. ಆದ್ರೆ ಇದರ ದುರುಪಯೋಗ ಆಗ್ತಿರೋದೇ ಹೆಚ್ಚು. ಕೊಡಗು ಜಿಲ್ಲಾಪಂಚಾಯತ್ ಹೋದ ವರ್ಷ ಕೊಡಗಿನ ಕಿತ್ತಳೆ ಹೆಸರಿನಲ್ಲಿ, ನಾಗಪುರದ ಕಿತ್ತಳೆ ಗಿಡಗಳನ್ನ ವಿತರಿಸಿದ್ದೇ ಇದಕ್ಕೆ ಉದಾಹರಣೆ.
ಮಡಿಕೇರಿಂದ ಕುಶಾಲನಗರಕ್ಕೆ ವಾಪಸ್ ಬರುವಾಗ ಸುಂಟಿಕೊಪ್ಪ ಹತ್ರ ಕಿತ್ತಳೆ ರಾಶಿ ನೋಡಿ, ಖರೀದಿಸೋಣ ಅಂತ ಅನ್ನಿಸ್ತು. ಗಾಡಿ ನಿಲ್ಲಿಸಿದ ಕೂಡ್ಲೇ ನಮ್ಮನ್ನ ನೋಡಿದ ಅಂಗಡಿಯವನು, `ಇದು ಸಕಲೇಶಪುರದ ಕಿತ್ತಳೆ ಸಾ..' ಅಂತ ಹೇಳಿ, ಅವನಾಗಿಯೇ ಮೂಸುಂಬಿ ತೆಗೆದುಕೊಟ್ಟ... ಸಿಹಿ ಸಿಹಿ ಮೂಸುಂಬಿ ತಿನ್ನವಾಗ `ನಂಜನಗೂಡಿನ ರಸಬಾಳೆ, ತಂದಿಹೆ ಕೊಡಗಿನ ಕಿತ್ತಳೆ' ಅನ್ನೋ ಪದ್ಯ ನೆನಪಾಯ್ತು. ಹಾಗಾಗಿ ಇದನ್ನೆಲ್ಲಾ ಬರೆಯಬೇಕಾಯ್ತು

Monday 19 December 2011

`ಕಂದಕ'


ಈಚೆಗೆ ಓದೋ ಹವ್ಯಾಸ ಕಡಿಮೆ ಆಗ್ತಿದೆ ಅನ್ನೋ ಮಾತಿದೆ. ಆದ್ರೆ, ಪುಸ್ತಕ ಮಾರಾಟ ಕಡಿಮೆ ಆಗಿಲ್ವಲ್ಲಾ ಅಂತ ವಾದ ಮಾಡುವವರೂ ಇದ್ದಾರೆ. ಎರಡೂ ನಿಜ. ಉದಹಾರಣೆಗೆ ನಾನೇ ಇದ್ದೀನಲ್ಲಾ.... ತಿಂಗಳಿಗೊಮ್ಮೆಯಾದ್ರೂ ಕೋರಮಂಗಲ ಸಪ್ನ ಬುಕ್ ಹೌಸ್ಗೆ ಹೋಗಿ ಹೊಸ ಪುಸ್ತಕಗಳನ್ನ ಖರೀದಿಸಿ ತಕ್ಕೊಂಡು ಬರ್ತೀನಿ.. ಆದ್ರೆ ಯಾಕೋ ಓದೋಕೇ ಮನಸ್ಸಾಗೋಲ್ಲ. ಮುನ್ನುಡಿ, ಬೆನ್ನುಡಿ ನೋಡಿ, ಮತ್ತೆ ಓದಿದ್ರೆ ಆಯ್ತು ಅಂತ ಇಟ್ಟುಬಿಡ್ತೀನಿ... ಆ `ಮತ್ತೆ' ಬರೋದೇ ಇಲ್ಲ. ಅಂಥದ್ರಲ್ಲಿ ಈಚೆಗೆ ಒಂದು ಪುಸ್ತಕ ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಯ್ತು. ಹೆಸ್ರು `ಕಂದಕ'
`ಕಂದಕ' ಕಣಿವೆ ಭಾರದ್ವಾಜ್ ಬರೆದಿರೋ ಕಾದಂಬರಿ. ಬಹುಶ: ಅದ್ರ ವಸ್ತು ಓದಿಸಿಕೊಂಡು ಹೋಯ್ತಾ ಅಥವಾ ಅವ್ರ ಬರವಣಿಗೆ ಶೈಲಿಯ ಅಂತ ಗೊತ್ತಿಲ್ಲ. ಆಫೀಸ್ನಿಂದ ರಾತ್ರಿ ರೂಂಗೆ ಬಂದಾಗ ಮಲಗೋ ಮೊದ್ಲು ಸುಮ್ನೆ `ಕಂದಕ'ದ ಮುನ್ನುಡಿ, ಬೆನ್ನುಡಿ ಮೇಲೆ ಕಣ್ಣಾಡಿಸಿದೆ. ಓದೋಣಂತ ಕೂತ್ಕೊಂಡೆ. ಓದಿ ಮುಗಿದ್ಮೆಲೆನೇ ಮಲಗಿದ್ದು!
ಕೊಡಗು ಜಿಲ್ಲೆಯನ್ನ ಯಾವೆಲ್ಲಾ ಸಮಸ್ಯೆಗಳು ಕಾಡುತ್ತಿವೆಯೋ ಅವೆಲ್ಲಾ `ಕಂದಕ'ಕಲ್ಲಿ ಕಾಣಿಸಿಕೊಂಡಿವೆ. ಮುಖ್ಯವಾಗಿ ಮಲೆನಾಡಿನ ಒಂದು ಹಳ್ಳಿಯಲ್ಲಿ ಬೆಳೆದ ಒಬ್ಬ ವಿದ್ಯಾವಂತ ಉದ್ಯೋಗಕ್ಕಾಗಿ ನಗರಕ್ಕೆ ಬರೋದು, ಅಲ್ಲಿ ಹೊಂದಿಕೊಳ್ಳೋದಿಕ್ಕೆ ಅವನ ಪರದಾಟ, ಮತ್ತೆ ಹುಟ್ಟೂರಿನ ಸೆಳೆತ ಇವೆಲ್ಲಾ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಕಾದಂಬರಿಯ ನಾಯಕ ನಟೇಶ ಒಬ್ಬ ಪತ್ರಕರ್ತ. ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿ, ಪತ್ರಿಕಾರಂಗಕ್ಕೆ ಬಂದವ್ನು. ಅದಕ್ಕೆ ಇರಬೇಕು ನನಗೆ `ಕಂದಕ' ಹಿಡಿಸಿದ್ದು ! ಆದ್ರೆ ಕಾದಂಬರಿಯ ಅಂತ್ಯ ನನಗೇಕೋ ಇಷ್ಟ ಆಗಿಲ್ಲ. ಭಾರದ್ವಾಜ್ ಅವ್ರಿಗೆ ಇದ್ನ ಹೇಳ್ಬೇಕೂಂತ ಇದ್ದೀನಿ.

Friday 16 December 2011

ಎಲ್ಲಿ ಹೋಯಿತು ಮಾನವೀಯತೆ ?



ನಿನ್ನೆ ರಾತ್ರಿ 12 ಗಂಟೆ. ಡ್ಯೂಟಿ ಮುಗ್ಸಿ ರೂಂಗೆ ಹೋಗೋಕೆ ಅಂತ ಕ್ಯಾಬ್ ಸ್ಟ್ಯಾಂಡ್ಗೆ ಹೋಗಿ ತಲುಪಿದ್ದೆ. ಅಷ್ಟೊತ್ತಿಗೆ ನೈಟ್ಶಿಫ್ಟ್ನ ಬಿಪಿ ನಾಡಿಗ್ ಹಿಂದೆನೇ ಓಡಿ ಬಂದು, ನಂ ಆಫೀಸ್ ಹತ್ರನೇ ಆ್ಯಕ್ಸಿಡೆಂಟ್ ಆದ ವಿಷ್ಯ ಹೇಳಿದ್ರು. ನೈಟ್ ಶಿಫ್ಟ್ ಕ್ಯಾಮೆರಾಮ್ಯಾನ್ ಅದಾಗ್ಲೇ ಎಂಜಿ ರೋಡ್ಲಿ ಆಗಿದ್ದ ಆ್ಯಕ್ಸಿಡೆಂಟ್ ಶೂಟ್ ಮಾಡೋಕೆ ರಿಪೋರ್ಟರ್ ಜೊತೆ ಹೋಗಿದ್ದ್ರು. ಇನ್ನೇನು ಮಾಡೋದು ಅಂತ ಯೋಚ್ನೆ ಮಾಡ್ತಿರ್ಬೇಕಾದ್ರೆ, ಸ್ಟುಡಿಯೋ ಕ್ಯಾಮೆರಾಮ್ಯಾನ್ ಓಡಿ ಹೋಗಿ ಕ್ಯಾಮೆರಾ ತಂದು ಶೂಟಿಂಗ್ಗೆ ರೆಡಿಯಾದ್ರು.
ಕೋರಮಂಗಲ ಬಿಗ್ಬಜಾರ್ನ ನಮ್ಮ ಆಫೀಸ್ ಹತ್ರನೇ ಆ್ಯಕ್ಸಿಡಂಟ್ ಆಗಿತ್ತು. ವಾಹನಗಳ ಪರಿಸ್ಥಿತಿ ನೋಡಿದ್ರೆ, ಕನಿಷ್ಠ ಇಬ್ರಾದ್ರೂ ತೀರ್ಕೊಂಡಿರ್ಬಹುದೇನೋ ಅನ್ನೋ ಥರ ಇತ್ತು. ಮಡಿವಾಳ ಕಡೆಯಿಂದ ಬರ್ತಿದ್ದ ಟಾಟಾ ಸಫಾರಿಯ ಕುಡುಕ ಡ್ರೈವರ್ ರೋಡ್ ಡಿವೈಡರ್ ದಾಟಿ ರಾಂಗ್ ಸೈಡಿನಲ್ಲಿ ನುಗ್ಗಿದ್ದ. ಆ ರಭಸಕ್ಕೆ ವ್ಯಾಗನ್ ಆರ್ನ ಮೂತಿ ಪುಡಿಪುಡಿ ಆಗಿತ್ತು. ಮತ್ತೊಂದು ಟಾಟಾ ಇಂಡಿಕಾಕ್ಕೂ ಹಾನಿ ಆಗಿತ್ತು. ಅಷ್ಟು ಕಿತಾಪತಿ ಮಾಡಿದ ಕುಡುಕ ಡ್ರೈವರ್ನ ಟಾಟಾ ಸಫಾರಿ ಎದುರಿಗೆ ಇದ್ದ ಫುಟ್ಪಾತ್ ಮೇಲೆ ಹೋಗಿನಿಂತುಬಿಟ್ಟಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿರ್ಲಿಲ್ಲ. ಆದ್ರೆ ನನಗೆ ಅಲ್ಲೊಂದು ಶಾಕ್ ಕಾದಿತ್ತು. ನಮ್ಮ ಜನ ಇಷ್ಟೊಂದು ಅಮಾನವೀಯವಾಗಿ ವತರ್ಿಸ್ತಾರ ? ಸಂವೇದನೆಯನ್ನ ಈ ಮಟ್ಟಿಗೆ ಕಳ್ಕೊಂಡಿದ್ದಾರಾ ಅಂತ ಯೋಚನೆ ಮಾಡೋ ಹಾಗಾಯಿತು.
ಈ ಆ್ಯಕ್ಸಿಡೆಂಟ್ ಆಗ್ತಿದ್ದ ಹಾಗೆ ಹೊಸೂರು ರೋಡ್ನಲ್ಲಿ ಟ್ರಾಫಿಕ್ ಜಾಂ ಆಯ್ತು. ಒಮ್ಮೆಲೇ ತುಂಬಾ ಜನ ಸೇರಿದ್ರು. ಪುಡಿಪಡಿಯಾದ ವಾಹನದೊಳಗೆ ಇರುವವರ ಸ್ಥಿತಿ ಏನೇನಾಗಿದೆ ಅನ್ನೋದನ್ನ ನೋಡೋ ಕಾಳಜಿ ಯಾರಿಗೂ ಇರಲಿಲ್ಲ. ಒಂದಿಷ್ಟು ಹುಡುಗರ ತಂಡ ಅಲ್ಲಿದ್ದ ಮೂರೂ ವಾಹನಗಳ ಡೋರ್ ಓಪನ್ ಮಾಡ್ತು. ಕೈಗೆ ಸಿಕ್ಕಿದ ಲ್ಯಾಪ್ಟಾಪ್, ಐ ಫೋನ್, ವ್ಯಾನಿಟಿ ಬ್ಯಾಗ್, ಪಸರ್್ ಕೊನೆಗೆ ನೀರಿನ ಬಾಟಲ್ ಎಲ್ಲವನ್ನೂ ದೋಚಿದ್ರು. ಗಾಯಗೊಂಡು ನರಳ್ತಿದ್ದವ್ರು ತಮ್ಮ ವಸ್ತುಗಳು ಇನ್ನೊಬ್ಬರ ಪಾಲಾಗ್ತಿರೋದನ್ನ ನೋಡಿ ಬೊಬ್ಬೆ ಹೊಡೀತಿದ್ದ್ರೂ, ಯಾವುದೇ ಪ್ರಯೋಜನ ಆಗಿಲ್ಲ. ಅಲ್ಲಿದ್ದ ಪೊಲೀಸ್ರು ಇದಕ್ಕೆಲ್ಲಾ ಮೂಕಸಾಕ್ಷಿಗಳಾಗಿದ್ದ್ರು. ನಮ್ಮ ಕೆಮೆರಾಮ್ಯಾನ್ ಆ್ಯಕ್ಸಿಡೆಂಟ್ ದೃಶ್ಯಗಳನ್ನ ಶೂಟ್ ಮಾಡ್ತಿದ್ದ್ರೆ, ಇದೇ ತಂಡ ಅಡ್ಡಿಪಡಿಸ್ತು. ಬಹುಶ: ಕೆಮೆರಾ ಲೈಟ್ ಬೆಳಕಿನಲ್ಲಿ ತಮ್ಮ ಕೈಚಳಕ ಎಲ್ಲಿ ಬಯಲಾಗುತ್ತೆ ಅನ್ನೊ ಭಯ ಇರ್ಬೇಕು. ಇಷ್ಟೇ ಅಲ್ಲ, ವ್ಯಾಗನ್ ಆರ್ನಲ್ಲಿ ಇದ್ದ ಗಾಯವಾಗಿದ್ದ ಮಹಿಳೆಯನ್ನ ಆ್ಯಂಬುಲೆನ್ಸ್ಗೆ ಸಾಗಿಸುವಾಗಂತೂ ಈ ತಂಡದ ಒಬ್ಬಾತ ನಡೆದುಕೊಂಡಿದ್ದು, ನಾಗರಿಕರು ಅನ್ನಿಸಿಕೊಂಡವರು ತಲೆತಗ್ಗಿಸುವ ಹಾಗಿತ್ತು. ಆಕೆ `ಡೋಂಟ್ ಟಚ್ ಮಿ' ಅಂತ ಕೂಗ್ತಿದ್ದ್ರೆ, ಈತ ಆಕೆಯ ಮುಟ್ಟಬಾರದ ಜಾಗಗಳನ್ನ ಮುಟ್ಟಿ ಸಂಗಡಿಗರತ್ತ ನೋಡಿ ಹಲ್ಲುಗಿಂಜುತ್ತಿದ್ದ.
ಸುದ್ದಿಮನೆಯಲ್ಲಿ ಕೂರುವ ನನಗೆ ಇಂಥದ್ದೆಲ್ಲಾ ಕೇಳಿ, ಓದಿ ಗೊತ್ತಿತ್ತಷ್ಟೆ... ಕೆಲವೊಂದು ಎಲ್ಲೋ ಅತಿರಂಜನೀಯ ಇರ್ಬಹುದೇನೋ ಅಂತ ಸುಮ್ನೆ ಆಗಿಬಿಡ್ತಿದ್ದೆ. ಆದ್ರೆ ನನ್ನ ಕಣ್ಣಮುಂದೆಯೇ ನಡೆದಾಗ ಮಾತ್ರ, ನಾವು ಇಷ್ಟು ಕೆಟ್ಟುಹೋಗಿದೆಯೇ ಅನ್ನಿಸೋಕೆ ಶುರುವಾಗಿದೆ. ಛೇ... ಎಂಥ ನಾಚಿಕೆಗೇಡು !

Sunday 11 December 2011

ಪ್ರಾನ್ಸ್ ನ `ಪರಶುರಾಮ'


ಇಲ್ಲಿ ಮಕ್ಕಳ ಮಧ್ಯೆ ಕೂತಿದ್ದಾರಲ್ಲ, ಇವ್ರು ಫ್ರಾನ್ಸ್ನ ಜೋಡಿ. ಭಾರತದ ಬಗ್ಗೆ ಹುಚ್ಚು ಅಭಿಮಾನ ಇಟ್ಟುಕೊಂಡಿರುವವರು. ಇಡೀ ಭಾರತವನ್ನ ಇಂಚಿಂಚೂ ತಿಳ್ಕೊಳ್ಬೇಕು ಅನ್ನೋದು ಇವ್ರ ಆಸೆ. ಅದಕ್ಕಾಗಿ ತಾಯಿ ನೆಲವನ್ನ ಬಿಟ್ಟು ಬಂದಿದ್ದಾರೆ. ನಮ್ಮ ದೇಶವನ್ನ ಅವ್ರು ಕಾಲುನಡಿಗೆಯಲ್ಲೇ ಸುತ್ತುತ್ತಿದ್ದಾರೆ. ಹಾಗೆ ಸದ್ಯ ಕುಶಾಲನಗರದಲ್ಲಿ ಈ ಜೋಡಿಯ ವಾಸ್ತವ್ಯ. ಇಲ್ಲಿಗೆ ಬರೋಕೆ ಮೊದ್ಲು ಗೋವಾದಲ್ಲಿ ಇದ್ದ್ರು. ಅಲ್ಲಿಂದ ಉಡುಪಿ ಮಂಗಳೂರು ಮಾರ್ಗವಾಗಿ ಮಡಿಕೇರಿಗೆ ಬಂದು ಈಗ ಕುಶಾಲನಗರ ತಲುಪಿಕೊಂಡಿದ್ದಾರೆ. ಈ ಜೋಡಿಗೆ ಯಾಕೋ ಗೋವಾ ಇಷ್ಟ ಆಗ್ಲಿಲ್ವಂತೆ. ಬಹುಶ: ಅದೇ ಬಿಳಿತೊಗಲಿನವರು ಬಟ್ಟೆಬಿಚ್ಚಿಕೊಂಡು ಗೋವಾದ ಸಮುದ್ರದಂಡೆಯ ಮರಳಿನ ಮೇಲೆ ಬಿದ್ದು ಹೊರಳಾಡೋದನ್ನ ನೋಡಿ, ಇವ್ರಿಗೆ ತಮ್ಮ ದೇಶದ ನೆನಪಾಗಿರಬೇಕೇನೋ... ಗೋವಾ ಒಂದು ಜಾಗ ಬಿಟ್ಟ್ರೆ ಇವ್ರ ಬಾಯಲ್ಲಿ ಬರೋದು `ವಿ ಲವ್ ಇಂಡಿಯಾ' ಅಂತನೇ...
ಅಂದ ಹಾಗೆ ಈ ಗಂಡಸಿನ ಹೆಸ್ರು. ಜಾನ್... ಈಕೆ ಅವ್ನ ಹೆಂಡತಿ, ಅದೆಂಥದ್ದೋ ಕ್ರಿಶ್ಚಿಯನ್ ಹೆಸ್ರು, ನೆನಪಿಗೆ ಬರ್ತಿಲ್ಲ. ಹೌದು, ಇದು ಕ್ರಿಶ್ಚಿಯನ್ ಜೋಡಿ. ಇವ್ರ ಸ್ವಂತ ನೆಲ ಫ್ರಾನ್ಸ್ನಲ್ಲಿ ಒಂದು ರಾತ್ರಿ ಚಚರ್್ನಲ್ಲಿ ಉಳ್ಕೊಳ್ತೀವಿ ಅಂದ್ರೆ, ಅಲ್ಲಿಂದ ಓಡಿಸಿ ಬಿಡ್ತಿದ್ದ್ರಂತೆ. ಆದ್ರೆ ಭಾರತದಲ್ಲಿ ಹಾಗಿಲ್ಲ ಅನ್ನೋದೇ ಇವ್ರ ಖುಷಿಗಳಲ್ಲಿ ಒಂದು. ದೇವಸ್ಥಾನ, ಮಂದಿರ, ಮಸೀದಿ ಕೊನೆಗೆ ಬೀದಿ ಬದಿಯ ಯಾರದ್ದೋ ಮನೆ... ಹೀಗೆ ಎಲ್ಲಿಯಾದ್ರೂ ಸರಿ ಒಂದು ರಾತ್ರಿ ಉಳ್ಕೊಳ್ಳೋದಿಕ್ಕೆ ಯಾವುದೇ ತೊಂದರೆ ಆಗಿಲ್ಲವಂತೆ. ಹೀಗೆ ಪಾದಯಾತ್ರೆ ಮಾಡ್ತಿರ್ಬೇಕಾದ್ರೆ, ರಾಜಸ್ತಾನದ ಜೈಪುರ ಹತ್ರ ಮರಳುಗಾಡಿನ ಹಳ್ಳಿ ಒಂದ್ರಲ್ಲಿ ಇವ್ರಿಗೆ ರಾತ್ರಿ ಕಳೀಬೇಕಾಗಿ ಬಂತು. ಎಲ್ಲೋ ಒಂದು ಪುಟ್ಟ ಗುಡಿಸಲು ಕಂಡಾಗ ಅಲ್ಲಿಯೇ ಇವ್ರು ಆಶ್ರಯ ಕೇಳಿದ್ದಾರೆ. ಜಠರವನ್ನೇ ಕರಗಿಸುವಂತ ಹಸಿವು ಬೇರೆ. ಆ ಗುಡಿಸಲು ನೋಡಿದರೆ ಸಾಕು, ಅದರ ಮನೆ ಯಜಮಾನ ಎಂಥ ಬಡತನದಲ್ಲಿ ಇದ್ದಾನೆ ಅನ್ನೋದು ಕಣ್ಣುಮುಂದೆ ಬರ್ತಿತ್ತು. ಅಂತ ಪರಿಸ್ಥಿತಿಲೂ `ಅತಿಥಿ ದೇವೋಭವ' ಅಂತ ಈ ಫ್ರಾನ್ಸ್ ಜೋಡಿಯನ್ನ ಉಪಚರಿಸಿದ್ದಾನೆ. ಈ ವಿಷಯ ಹೇಳ್ಬೇಕಾದ್ರೆ ಜಾನ್ ದಂಪತಿ ಕಣ್ಣಲ್ಲಿ ನೀರು ತೊಟ್ಟಿಕ್ಕುತ್ತೆ.
ಜಾನ್ ಹತ್ರ ಇರೋ ಸಂಪತ್ತು ಒಂದು ವೀಡಿಯೋ ಕೆಮೆರಾ ಮತ್ತೆ ಎರಡು ಕೊಳಲುಗಳು. ಜಾನ್ ತುಂಬಾ ಚೆನ್ನಾಗಿ ಕೊಳಲು ಊದ್ತಾನೆ. ಇದನ್ನೂ ಅವ್ನು ಕಲಿತಿದ್ದು ಭಾರತದಲ್ಲಿ. ಮೊನ್ನೆ ಕಣಿವೆಯ ಭಾರದ್ವಾಜ್ ಅವ್ರ `ಕಂದಕ' ಬಿಡುಗಡೆ ಸಮಾರಂಭದಲ್ಲಿ ಪ್ರಾರ್ಥನೆ ಇರ್ಲಿಲ್ಲ. ಬದ್ಲಿಗೆ ಜಾನ್ನ ಕೊಳಲುವಾದನ ಕಾರ್ಯಕ್ರಮ ಇತ್ತು. ಆತನ ತನ್ಮಯತೆಯ ಕೊಳಲು ನುಡಿಸುವಿಕೆ ನಿಜಕ್ಕೂ ಅದ್ಭುತ.
ಇಂಥ ಜಾನ್ ಮತ್ತೆ ಅವ್ನ ಶ್ರೀಮತಿ ಈಗ ಕುಶಾಲನಗರದಿಂದ ಕ್ಯಾಲಿಕಟ್ ಕಡೆ ಹೊರಟಿದ್ದಾರೆ. ಯಥಾ ಪ್ರಕಾರ ಅದೇ ಕಾಲ್ನಡಿಗೆ... ಬಹುಶ: ಪರಶುರಾಮನ ಪಾದದ ಶಕ್ತಿ ಇವ್ರಿಬ್ರಿಗೆ ಸಿಕ್ಕಿರ್ಬೇಕೇನೋ... `ಆಲ್ ದಿ ಬೆಸ್ಟ್' ಅನ್ನೋದಷ್ಟೇ ನಮ್ಮ ಕಾಯಕ.

Monday 28 November 2011

ಅಪರೂಪದ ಮೋಹನ್ಕುಮಾರ್

ದೊಡ್ಡ ದೊಡ್ಡ ಉದ್ಯಮಿಗಳು ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಸೇವೆಗೆ ಅಂತ ತೆಗೆದಿಡೋದು ಉಂಟು. ಅಲ್ಲಲ್ಲಿ ಕೆಲವು ಸಣ್ಣಪುಟ್ಟ ವ್ಯಾಪಾರಿಗಳೂ ಇಂಥ ಕೆಲಸ ಮಾಡೋದನ್ನು ಕೇಳಿದ್ದೇವೆ. ಕೊಡಗಿನ ಕುಶಾಲನಗರದಲ್ಲಿರೋ ಮನುಪ್ರೆಸ್ ಮಾಲಿಕ ಮೋಹನ್ ಕುಮಾರ್ ಈ ಥರದ ಅಪರೂಪದ ವ್ಯಕ್ತಿ. ಹೋದ ವಾರ ಕುಶಾಲನಗರಕ್ಕೆ ಹೋದಾಗ ಮೋಹನ್ ಕುಮಾರ್ ಅವರ ಸಾಮಾಜಿಕ ಕಳಕಳಿಯನ್ನ ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತು. ಅದು `ಕಲಾಮೇಳ'
ಪ್ರತಿವರ್ಷ ನವೆಂಬರ್ ತಿಂಗಳ ಒಂದು ಶನಿವಾರ ಈ `ಕಲಾಮೇಳ' ನಡೆಯುತ್ತೆ. ಅದು ಪ್ರೌಢ ಶಾಲಾ ಮಕ್ಕಳಿಗೋಸ್ಕರ ನಡೆಯುವ ಜಿಲ್ಲಾಮಟ್ಟದ ಸ್ಪಧರ್ೆ. ಅಲ್ಲಿ ರಂಗೋಲಿ, ಪ್ರಬಂಧ, ಚಿತ್ರಕಲೆ, ಸಮೂಹನೃತ್ಯ ಮತ್ತು ಭರತನಾಟ್ಯ ಸ್ಪಧರ್ೆ ಇರುತ್ತೆ. ಅದರಲ್ಲೂ ಪ್ರಬಂಧ ಸ್ಪಧರ್ೆಗೆ ಸ್ಥಳದಲ್ಲೇ ವಿಷಯ ಕೊಡಲಾಗುತ್ತೆ. ಪ್ರಬಂಧಕ್ಕೆ ವಿಷಯ ನಿರ್ಧರಿಸುವವರೂ ಸ್ವತ: ಮೋಹನ್ಕುಮಾರ್ ಅವರೇ. ಈ ವರ್ಷ ನಡೆದಿದ್ದು 13ನೇ ವರ್ಷದ ಕಲಾಮೇಳ ! ಮಕ್ಕಳೇ ಇಲ್ಲಿ ಉದ್ಘಾಟಕರು. ಯಾವುದೇ ಭಾಷಣದ ಅಬ್ಬರ ಇರೋಲ್ಲ. ಒಂದಿಡೀ ದಿನ ಮಕ್ಕಳದ್ದೇ ಸಾಮ್ರಾಜ್ಯ ! ಆರಂಭದಿಂದ ಇಲ್ಲಿವರೆಗೂ ಸ್ಪಧರ್ೆಯ ವಿಭಾಗಗಳು ಬದಲಾಗಿಲ್ಲ. ಆದ್ರೆ ಭಾಗವಹಿಸುವವರ ಸಂಖ್ಯೆ ಮಾತ್ರ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತನೇ ಇದೆ. ಎಲ್ಲರಿಗೂ ಮಧ್ಯಾಹ್ನ ರುಚಿಕಟ್ಟಾದ ಊಟದ ವ್ಯವಸ್ಥೆ ಇರುತ್ತೆ. ಭಾಗವಹಿಸಿದವರಿಗೆಲ್ಲಾ ಪ್ರಥಮ, ದ್ವಿತೀಯ ಸೇರಿ ಒಂದಲ್ಲಾ ಒಂದು ರೀತಿಯ ಬಹುಮಾನವೂ ಕೊಡ್ತಾರೆ. ಎಲ್ಲಾ ಸೇರಿದರೆ ಹತ್ತಿರ ಹತ್ತಿರ ಒಂದೂವರೆ ಲಕ್ಷ ರೂಪಾಯಿ ಖಚರ್ಾಗುತ್ತೆ. ಇದು ಮೋಹನ್ಕುಮಾರ್ ತಮ್ಮ ಸ್ವಂತ ಜೇಬಿನಿಂದ ತೆಗೆದು ಕೊಡೋ ಹಣ !
`ಆಹಾರ ಅಪವ್ಯಯ ತಡೆಗಟ್ಟಿ ಅಭಿಯಾನ' ಇದು ಮೋಹನ್ಕುಮಾರ್ ಅವರ ಮತ್ತೊಂದು ಸಾಮಾಜಿಕ ಕಳಕಳಿಯ ಕಾರ್ಯಕ್ರಮ. ಊಟದ ತಟ್ಟೆಯಲ್ಲಿ ಒಂದಗಳು ಬಿಟ್ಟು ಎದ್ದರೂ ಮೋಹನ್ಕುಮಾರ್ ಅವರಿಗೆ ಸಹಿಸೋಕ್ಕೆ ಆಗೋಲ್ಲ. ಇದನ್ನೇ ಅವ್ರು ಒಂದು ಅಭಿಯಾನವನ್ನಾಗಿ ಶುರು ಮಾಡಿದಾರೆ. ಆಹಾರ ಬೆಳೆಯೋದಿಕ್ಕೆ ರೈತರು ಪಡೋ ಕಷ್ಟ ಮತ್ತು ಒಂದು ಹೊತ್ತಿನ ಊಟಕ್ಕೂ ಕೆಲವರು ಪರದಾಡೋ ಪರಿಯನ್ನ ಮೋಹನ್ಕುಮಾರ್ ಮನಮುಟ್ಟೋ ಹಾಗೆ ವಿವರಿಸೋ ಕರಪತ್ರ ಪ್ರಿಂಟ್ ಮಾಡ್ಸಿದಾರೆ. ಅದನ್ನ ಶಾಲಾಕಾಲೇಜುಗಳ ಮಕ್ಕಳಿಗೆ ಹಂಚ್ತಾರೆ. ಕಲ್ಯಾಣಮಂಟಪಗಳಿಗೆ ಹೋಗಿ ಬ್ಯಾನರ್ ಕಟ್ತಾರೆ. ಏನಾದ್ರು ಕಾರ್ಯಕ್ರಮಗಳು ನಡೀತ್ತಿದ್ದ್ರೆ ಅಲ್ಲಿಗೂ ಹೋಗಿ ಜಾಗೃತಿ ಮೂಡಿಸೋ ಕೆಲಸ ಮಾಡ್ತಾರೆ. ಇಲ್ಲೂ ವರ್ಷಕ್ಕೆ ಲಕ್ಷಕ್ಕೂ ಹೆಚ್ಚು ರೂಪಾಯಿ ಕೈಬಿಟ್ಟು ಹೋಗುತ್ತೆ. ಅದೂ ಅವರ ಸ್ವಂತ ದುಡ್ಡು.
ಮೋಹನ್ ಕುಮಾರ್ ಅವ್ರ ಇಂಥ ಕೆಲಸ ಹೊರ ಜಗತ್ತಿಗೆ ಗೊತ್ತೇ ಆಗೋಲ್ಲ. ಏಕಂದ್ರೆ ಅವ್ರು ಎಲ್ಲರ ಹಾಗೆ ಪ್ರಚಾರ ಬಯಸೋ ವ್ಯಕ್ತಿ ಅಲ್ಲ. ಇಂಥವರ ಸಂತತಿ ಸಾವಿರ ಆಗಲಿ...