Monday 10 October 2011

ತಿಮ್ಮಯ್ಯ ಮಾಷ್ಟ್ರು....


ಮೂರು ಅಡಿಯೂ ಎತ್ತರ ಇಲ್ಲದ ವಾಮನ ಮೂತರ್ಿ... ಅವ್ರು ಹತ್ತಿರ ಬಂದ್ರು ಅಂದ್ರೆ ಬೀಡಿಯ ಕಮಟು ವಾಸನೆ ! ಯಡ್ಯೂರಪ್ಪ ಥರ ಯಾವಾಗ್ಲೂ ಸಫಾರಿ ಹಾಕೋ ಮನುಷ್ಯ.... ವಿದ್ಯಾಥರ್ಿಗಳ ಪಾಲಿಗೆ ಯಮಸ್ವರೂಪಿ... ಅವ್ರೇ, `ತಿಮ್ಮಯ್ಯ ಮಾಷ್ಟ್ರು'
ತಿಮ್ಮಯ್ಯ ಮಾಷ್ಟ್ರು ಒಂಥರ ವಿಶಿಷ್ಟ ವ್ಯಕ್ತಿತ್ವದ ಮನುಷ್ಯ. ಅವ್ರು ಬೀಡಿ ಸೇದಿಕೊಂಡೇ ಮಕ್ಕಳಿಗೆ ಧೂಮಪಾನದ ಅಪಾಯಗಳ ಬಗ್ಗೆ ಮಾತಾಡ್ತಿದ್ದ್ರು. ಏಕಂದ್ರೆ ಮಾಷ್ಟ್ರು ಪಾಠ ಮಾಡ್ತಿದ್ದಿದ್ದು ವಿಜ್ಞಾನ ಸಬ್ಜೆಕ್ಟ್ ! ಇಂಗ್ಲೀಷ್ ಕೂಡ ಹೇಳಿಕೊಡ್ತಿದ್ದ್ರು. ಏಳನೇ ಕ್ಲಾಸ್ಗೆ ಅವ್ರೇ ಕ್ಲಾಸ್ ಟೀಚರ್...! ಇಂಥ ತಿಮ್ಮಯ್ಯ ಮಾಷ್ಟ್ರನ್ನ ನೆನೆಸಿಕೊಂಡ್ರೆ, ತಪ್ಪುಮಾಡಿದ, ಹೋಮ್ವಕರ್್ ಮಾಡದ ಮಕ್ಕಳ ಚಡ್ಡಿ ಒದ್ದೆ ಆಗಿಬಿಡ್ತಿತು !
ನಮ್ ಕಡೆ ಮಳೆಗಾಲಕ್ಕೆ 15 ದಿನ ರಜೆ ಕೊಡ್ತಾರೆ. ಆಗ ಕೈ ತುಂಬಾ ಹೋಮ್ವಕರ್್ ಕೂಡ ಇರುತ್ತೆ.... ನನ್ನಂಥ ಸೋಮಾರಿಗಳು ಇದ್ರಿಂದೆಲ್ಲಾ ತಪ್ಪಿಸಿಕೊಳ್ಳೋದೇ ಹೆಚ್ಚು. ಹೋಮ್ವಕರ್್ ಮಾಡದೇ ಕ್ಲಾಸ್ಗೆ ಹೋಗಿ, ಏನಾದ್ರೂ ಸುಳ್ಳು ಹೇಳಿ ಬಚಾವಾಗಿ ಬಿಡ್ತಿದ್ದೆವು. 6ನೇ ಕ್ಲಾಸ್ ತನಕ ಇದಕ್ಕೆಲ್ಲಾ ಯಾವುದೇ ಅಡ್ಡಿ ಆಗಿರ್ಲಿಲ್ಲ. ಆದ್ರೆ 7ನೇ ಕ್ಲಾಸ್ನಲ್ಲಿ ಮಾತ್ರ ತಿಮ್ಮಯ್ಯ ಮಾಷ್ಟ್ರಿಂದ ತಪ್ಪಿಸಿಕೊಳ್ಳೋಕೆ ಕಷ್ಟ ಆಗಿಬಿಡ್ತು. ಪುಸ್ತಕ ತರ್ಲಿಕ್ಕೆ ಮರ್ತು ಹೋಯ್ತು ಅಂತ ಹೇಳಿ ಮೊದಲ ದಿನ ಹೇಗೋ ಸುಧಾರಿಸಿಕೊಂಡೆ ! ನನ್ನ ಸೋಮಾರಿ ಗೆಳೆಯರದ್ದು ಇದೇ ನೆಪ ! ಮಾಷ್ಟ್ರು ಸೈಲೆಂಟಾಗಿ ನಮ್ಮ ಮುಖ ನೋಡಿ, ಸರಿ ನಾಳೆ ತಂದು ತೋರ್ಸಿ ಅಂತ ಹೇಳಿ ಆವತ್ತು ಬಿಟ್ಟುಬಿಟ್ಟ್ರು. ಹೋಮ್ವಕರ್್ ಮಾಡಿದ್ದ್ರೆ ತಾನೆ, ನಾವು ತಂದು ತೋರಿಸೋದು ! ಎರಡನೇ ದಿನ ನಮ್ಮದ್ದು ಸಾಮೂಹಿಕ ಚಕ್ಕರ್ ! ಮೂರನೇ ದಿನಕ್ಕೆ ಮಾಷ್ಟ್ರು ಮರ್ತುಬಿಡ್ತಾರೆ ಅನ್ನೋದು ನಮ್ಮ ಯೋಚನೆ ಆಗಿತ್ತು. ಆ ದಿನವೂ ಬಂತು. ಮಾಷ್ಟ್ರು ಅಟೆಂಡೆನ್ಸ್ ಕರೆಯುವಾಗ್ಲೇ, ನಾವು ಹಿಂದಿನ ದಿನ ಯಾಕೆ ಬಂದಿರ್ಲಿಲ್ಲ ಅನ್ನೋದನ್ನ ಕೇಳಿದ್ರು. ನಾನು ಜ್ವರ ಅಂತ ಹೇಳಿದ್ರೆ, ಇನ್ನೊಬ್ಬನಿಗೆ ಮನೇಲಿ ಗದ್ದೆ ನಾಟಿ, ಮತ್ತೊಬ್ಬನಿಗೆ ಎತ್ತುಗೆ ಹುಷಾರು ಇರ್ಲಿಲ್ಲ! ಹೀಗೆ ಒಬ್ಬೊಬ್ಬರದ್ದು ಒಂದೊಂದು ನೆಪ. ಅದನ್ನೂ ಮಾಷ್ಟ್ರು ಮೌನವಾಗೇ ಕೇಳಿಸಿಕೊಂಡ್ರು. ನಮ್ಗೆಲ್ಲಾ ಒಳಗೆಲ್ಲಾ ಒಂಥರ ಖುಷಿ... ಅಬ್ಬಾ, ತಪ್ಪಿಸಿಕೊಂಡು ಬಿಟ್ವಲ್ಲಾ ಅನ್ನೋ ಸಂತಸ ! ಆದ್ರೆ ಅದು ತುಂಬಾ ಹೊತ್ತು ಇರ್ಲಿಲ್ಲ ! ನಮ್ಮ ಸೋಮಾರಿ ಗೆಳೆಯರಲ್ಲಿ ಒಬ್ಬನಾದ ಪ್ರವೀಣನನ್ನ ಕರ್ದು, ಸ್ಟಾಫ್ ರೂಮ್ನಿಂದ ಬೆತ್ತ ತರ್ಸಿದ್ರ್ರು... ಮೊದ್ಲ ಬಲಿ ಪಶು ಅವ್ನೇ...`ಪ್ರವೀಣ್, ಎಲ್ಲಿ ನಿನ್ನ ಹೋಮ್ ವಕರ್್?' ಅಷ್ಟೇ.... ನಮ್ಗೆಲ್ಲಾ ಕೈ ಕಾಲು ನಡುಕ ಶುರುವಾಯ್ತು. ಹೋಮ್ವಕರ್್ ಮಾಡಿದ್ರಲ್ಲಾ ತೋರಿಸೋಕೆ? ನಮ್ಗೆ 5 ಹುಡುಗರಿಗೆ ಸಾಮೂಹಿಕ ಲಾಠಿ ಪ್ರಹಾರ ಆಯ್ತು.... ಕೋಲು ಮುರಿಯೋ ತನಕ ಅವ್ರ ಸಿಟ್ಟು ಇಳ್ದಿರ್ಲಿಲ್ಲ... ಅಲ್ಲಿಗೆ ನಿಲ್ಲಲಿಲ್ಲ ಅವ್ರ ಶೌರ್ಯ, ಸಂಜೆ ಶಾಲೆಯಿಂದ ಮನೆಗೆ ಹೋಗುವಾಗ ಈ ವಿಷಯವನ್ನ ಊರಿಗೆಲ್ಲಾ ಕೇಳೋ ಹಾಗೆ ಹೇಳಿಕೊಂಡು ಬಂದುಬಿಟ್ಟ್ರು. ` ಏಯ್ ನೋಡ್ರಾ, ನಿನ್ನ ಮಂಙಂಗೆ ಲಾಯ್ಕ ಬಿಟ್ಟೊಳೆ.. ಇನ್ನಾದ್ರೂ ಅವಂಗೆ ಸರಿಯಾಗಿ ಓದಿಕೆ ಹೇಳು' ಅಂತ ನಮ್ಮೆಲ್ಲರ ಅಪ್ಪಂದಿರಿಗೆ ಫಿಟ್ಟಿಂಗ್ ಇಟ್ಟುಬಿಟ್ಟ್ರು. ನಂತ್ರ ನಂ ಮನೆಗಳಲ್ಲಿ 2ನೇ ಇನ್ನಿಂಗ್ಸ್ ಕೂಡ ನಡ್ದು ಹೋಯ್ತು.
ಆವತ್ತು ತಿಮ್ಮಯ್ಯ ಮಾಷ್ಟ್ರು ವಿಜ್ಞಾನ ಪಾಠ ಮಾಡ್ತಿದ್ದ್ರು. ನೀರಿನ ಬಗ್ಗೆ ಹೇಳ್ತಿದ್ದ್ರು. ನೀರಿಗೆ ಬಣ್ಣ ಇಲ್ಲ ಅನ್ನೋದು ಅವ್ರು ಹೇಳಿದ ವಿಷಯಗಳಲ್ಲಿ ಒಂದು. ಪಾಠ ಎಲ್ಲಾ ಮುಗಿದ್ಮೆಲೆ ಪ್ರಶ್ನೆ ಕೇಳೋ ಅಭ್ಯಾಸ ಅವ್ರಿಗಿತ್ತು. `ನೀರಿನ ಬಣ್ಣ ಯವುದು?' ಅಂತ ಮಾಷ್ಟ್ರು ಕೇಳಿದಾಗ `ನೀರಿಗೆ ಬಣ್ಣ ಇಲ್ಲ' ಅಂತ ನಾವೆಲ್ಲಾ ಒಟ್ಟಿಗೆ ಹೇಳಿದ್ವಿ... ಆದ್ರೆ ಹಿಂದಿನ ಬೆಂಚಿನಿಂದ ಯಾವುದೋ ಒಂದು ಧ್ವನಿ `ನೀರಿನ ಬಣ್ಣ ಬಿಳಿ' ಅಂತ ಹೇಳ್ದ ಹಾಗೆ ಆಯ್ತು. `ವೇರಿ ಗುಡ್... ನೀರಿನ ಬಣ್ಣ ಬಿಳಿ...ಸರಿಯಾದ ಉತ್ತರ. ಯಾರಪ್ಪ ಅದು ಹೇಳಿದ್ದು? ಎದ್ದು ನಿಲ್ಲಿ...' ಅಂತ ಮಾಷ್ಟ್ರು ಹೇಳಿದ್ರು... ಆ ಉತ್ತರ ಹೇಳಿದ್ದು ತಲಕಾವೇರಿಯಿಂದ ಬರ್ತಿದ್ದ ಸುನಿಲ್... ಖುಷಿಯಿಂದಲೇ ಎದ್ದು ನಿಂತ... ಅಷ್ಟೇ.. ಈ ನಮ್ಮ ತಿಮ್ಮಯ್ಯ ಮಾಷ್ಟ್ರಿಗೆ ಮೈಯೆಲ್ಲಾ ಉರ್ದು ಹೋದ ಹಾಗೆ ಆಯ್ತು... ಸೂಪರ್ಮ್ಯಾನ್ ಮೈಯೊಳಗೆ ಆವಾಹನೆ ಆಗಿಬಿಟ್ಟ. ಪಾಠ ಮಾಡ್ತಿದ್ದಲ್ಲಿಂದ ಹಿಂದಿನ ಬೆಂಚಿಗೆ, ಡೆಸ್ಕ್ನಿಂದ ಡೆಸ್ಕ್ಗೆ ಹಾರುತ್ತಲೆ ತಲುಪಿದ್ರು... ಡೆಸ್ಕ್ ಮೇಲೆ ಕುಕ್ಕರಗಾಲಿನಲ್ಲಿ ಕೂತ್ಕೊಂಡು ನಿಂತಿದ್ದ ಸುನಿಲ್ನ ಎರಡೂ ಕೆನ್ನೆಗೆ ತಮ್ಮ ಕೈಸೋಲುವಷ್ಟೂ ಹೊಡೆದ್ರು... ಅವ್ನು `ನೀರಿಗೆ ಬಣ್ಣ ಇಲ್ಲ' ಅಂತ ಹೇಳಿದ್ಮೆಲೆನೇ ಬಿಟ್ಟಿದ್ದು.
ಇನ್ನೊಂದು ದಿನ ಇಂಗ್ಲಿಷ್ ಪಾಠ ಮಾಡ್ತಿದ್ದ್ರು... ಆಗ `ಬಲೂನ್ ಮ್ಯಾನ್' ಅನ್ನೋ ಒಂದು ಪದ್ಯ ಇತ್ತು. ಪರೀಕ್ಷೆಗಾಗಿ ಪದ್ಯವನ್ನ ಬಾಯಿಪಾಠ ಮಾಡಿಕೊಳ್ಳಬೇಕಿತ್ತು....ಅದನ್ನ ಬೋಡರ್್ ಹತ್ರ ನಿಂತು, ಮಾಷ್ಟ್ರ ಮುಂದೆ ಹೇಳ್ಬೇಕಿತ್ತು...ಒಬ್ಬೊಬ್ರಾಗಿ ಹೇಳ್ತಾ ಬಂದ್ರು... ಜಗದೀಶನ ಸರದಿ ಬಂತು. ಆ ಪದ್ಯದಲ್ಲಿ `ಇಫ್ ದೇರ್ ಈಸ್ ವಿಂಡ್ ಅಟ್ ಆಲ್' ಅನ್ನೋ ಸಾಲು ಬರುತ್ತೆ. ಆ ಜಗದೀಶನಿಗೆ `ಇಫ್' ಅನ್ನೊದಿಕ್ಕೆ ಬರ್ತಿರ್ಲಿಲ್ಲ. `ಇಪ್' ಅಂತನೇ ಹೇಳ್ತಿದ್ದ... ತಿಮ್ಮಯ್ಯ ಮಾಷ್ಟ್ರು ಎಷ್ಟೇ ತಿದ್ದಿ ಹೇಳಿದ್ರೂ ಜಗದೀಶನ ಬಾಯಲ್ಲಿ ಮಾತ್ರ `ಇಫ್', `ಇಪ್' ಆಗಿಯೇ ಉಳ್ಕೊಂಡುಬಿಡ್ತು....ಮಾಷ್ಟ್ರಿಗೆ ಸಿಟ್ಟು ನೆತ್ತಿಗೆ ಏರ್ತು.... ಬಿಳಿ ಕಲರ್ನ ಎರಡು ರೆನಾಲ್ಡ್ ಪೆನ್ಗಳನ್ನ ತಕ್ಕೊಂಡ್ರು. ಜಗದೀಶ್ನ ಬಾಯಿಯಲ್ಲಿ ತುಟಿಯ 2 ಮೂಲೆಗೂ ಒಂದೊಂದು ಪೆನ್ನು ಇಟ್ಟು. `ಈಗ ಹೇಳು..ಇಫ್...' ಏನಾಶ್ಚರ್ಯ! ಜಗದೀಶನ ಬಾಯಲ್ಲಿ ಬರ್ತಿದ್ದ `ಇಪ್' `ಇಫ್' ಆಗೇ ಬಿಡ್ತು... ಅಲ್ಲಿಂದ ಅವ್ನು ಯಾವತ್ತೂ ಅಂಥ ತಪ್ಪು ಮಾಡೇ ಇಲ್ಲ. ಈಗ ಜಗದೀಶ್ ಆಮರ್ಿಯಲ್ಲಿದ್ದಾನೆ. ಅವ್ನನ್ನನ್ನ ನಾವೇಲ್ಲಾ ಗುರುತಿಸೋದು `ಇಪ್' ಜಗದೀಶ್ ಅಂತನೇ....
7ನೇ ಕ್ಲಾಸ್ನ ವಾಷರ್ಿಕ ಪರೀಕ್ಷೆ ಮುಗ್ದಿತ್ತು... ರಿಸಲ್ಟ್ ಬರ್ಬೇಕಿತ್ತಷ್ಟೇ. ಆವತ್ತು ಏಪ್ರಿಲ್ 5 ಅಥವಾ ಆರನೇ ತಾರೀಕು ಇರ್ಬೇಕು ಅಂತ ಕಾಣುತ್ತೆ. ಗಿರಿ, ಎಸ್ಎಸ್ಎಲ್ಸಿ ಎಕ್ಸಾಂಗೆ ರೆಡಿ ಆಗ್ತಿದ್ದ. ನಾನು ನಮ್ಮ ಮನೆ ಹಿತ್ತಲಲ್ಲಿ ಏನೋ ಆಟ ಆಡ್ಕೊಂಡು ಕೂತಿದ್ದೆ. ತಿಮ್ಮಯ್ಯ ಮಾಷ್ಟ್ರು, `ಏಯ್ ಸುನಿಲ್' ಅಂತ ಕರ್ಕೊಂಡು ಸೀದಾ ನಮ್ಮ ಮನೆ ಹಿತ್ತಲಿಗೆ ಬಂದವ್ರೇ, ನನ್ನ ಎರಡೂ ಕೆನ್ನೆಗೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಹೊಡ್ದ್ರು. ನಂತರ ಕೆನ್ನೆಗೆ ಒಂದು ಕಿಸ್ ಕೊಟ್ಟು, `ಮಂಙ, ನೀನ್ ಸೈನ್ಸ್ ಎಕ್ಸಾಂ ತುಂಬಾ ಲಾಯ್ಕ ಬರ್ದೊಳಾ...ಎಲ್ಲರ್ಕಿಂತ ಜಾಸ್ತಿ ಮಾರ್ಕ್ ನಿಂಗೆ ಸಿಕ್ಕಿಟ್ಟು... ಇನ್ನೂ ಲಾಯ್ಕ ಓದೋಕು ಆತಾ..' ಅಂತ ಹೇಳಿ ಸೀದಾ ಹೊರಟು ಬಿಟ್ಟ್ರು, ತಿಮ್ಮಯ್ಯ ಮಾಷ್ಟ್ರು....
ಈಗ ಒಮ್ಮೊಮ್ಮೆ ಯಾವುದಾದ್ರು ಸ್ಕೂಲ್ಗಳಲ್ಲಿ ಅಧ್ಯಾಪಕರು ಮಕ್ಳನ್ನ ಶಿಕ್ಷಿಸಿದ್ರೆ, ಅದು ದೊಡ್ಡ ಸುದ್ದಿ ಆಗಿಬಿಡುತ್ತೆ. ಸುದ್ದಿಮನೇಲಿ ಇರೋ ನನಗೆ ಆಗ ತಿಮ್ಮಯ್ಯ ಮಾಷ್ಟ್ರ ಸಿಟ್ಟು, ಪ್ರೀತಿ, ವಿದ್ಯಾಥರ್ಿಗಳ ಮೇಲಿನ ಕಾಳಜಿ ನೆನಪಾಗುತ್ತೆ... ವೈಯಕ್ತಿಕವಾಗಿ ಅವ್ರು ಹೇಗೇ ಇರ್ಲಿ, ಅಂಥ ಮೇಷ್ಟ್ರು ಸಿಕ್ಕಿಲ್ಲ ಅಂದ್ರೆ ನಾವೇನು ಆಗಿಬಿಡ್ತಿದ್ವೋ ಗೊತ್ತಿಲ್ಲ...