Sunday 16 October 2011

ಜಾತ್ರೆ ಸಂಭ್ರಮ....



ತಲಕಾವೇರಿ ಜಾತ್ರೆ ಅಂದ್ರೆ ಸಾಕು, ನಮ್ಗೆಲ್ಲಾ ಅದು ತುಂಬಾ ಸಂಭ್ರಮದ ಕ್ಷಣ.... ಅದಕ್ಕಾಗಿ ವರ್ಷ ಪೂತರ್ಿ ಕಾದಿತರ್ೇವೆ. ಬೇಸಿಗೆ ರಜೆ ಕಳ್ದ ಕೂಡ್ಲೇ, ಮಳೆಯಲ್ಲೇ ಶಾಲೆಗೆ ಹೋಗೋ ಸಂಕಷ್ಟ... ಅದ್ಕೆ ಹೊಂದಿಕೊಂಡೆವು ಅಂತಿರುವಾಗ್ಲೇ ಮಳೆಗಾಲದ ರಜೆ ಬಂದಿರುತ್ತೆ. ಆ 15 ದಿನದ ರಜೆ ಮುಗ್ದು ಶಾಲೆ ಶುರುವಾದ್ರೂ ಮಳೆ ಜಿನುಗುತ್ತಲೇ ಇರುತ್ತೆ. ಹೊರಗೆಲ್ಲೂ ಹೋಗೋ ಹಾಗಿಲ್ಲ... ಇಂಥ ಮಳೆ ಕಡಿಮೆ ಆಗೋದು, ಅಕ್ಟೋಬರ್ ಕಾಲಿಟ್ಟಾಗಲೇ... ಅದು ಜಾತ್ರೆಯ ತಿಂಗಳು. ಅಕ್ಟೋಬರ್ ಮೊದಲ ದಿನದಿಂದಲೇ ಸಿದ್ಧತೆ ಶುರುವಾಗಿರುತ್ತೆ. ಶಾಲಾ ಮೈದಾನದಲ್ಲಿ ಬೆಳೆದಿರುವ ಕಳೆ ತೆಗೆಯೋದು, ಮನೆ ಅಂಗಳ ಕ್ಲೀನ್ ಮಾಡೋದು, ಮನೆ ಗೋಡೆಗಳಿಗೆ ಸುಣ್ಣಬಣ್ಣ ಬಳಿಯೋದು...ಈಗ್ಲೂ ಎಲ್ಲಾದ್ರೂ ಪೇಯಿಂಟ್ ಸ್ಮೆಲ್ ಬಂದ್ರೆ ಅದೆಲ್ಲಾ ಕಣ್ಣು ಮುಂದೆ ಬರುತ್ತೆ. ಜಾತ್ರೆಗೆ ಇನ್ನು ಒಂದು ವಾರ ಬಾಕಿ ಇದೆ ಅನ್ನುವಾಗ ನಮ್ಮ ಸಡಗರಕ್ಕೆ ಮಿತಿಯೇ ಇತರ್ಿಲರ್ಿಲ್ಲ... ಭಾಗಮಂಡಲದಲ್ಲಿ ನಮಗೊಂದು ಅಂಗಡಿ ಇತ್ತು. ಜಾತ್ರೆ ಟೈಂನಲ್ಲಿ, ಕುಂಕುಮ, ತೆಂಗಿನಕಾಯಿ, ಕಪರ್ೂರ, ಕೊಬ್ಬರಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ... ಇಂಥವೆಲ್ಲಾ ಭರ್ಜರಿಯಾಗಿ ಮಾರಾಟ ಆಗ್ತವೆ. ಇದ್ನೆಲ್ಲಾ ಮೈಸೂರಿನಿಂದ ತರಲಾಗ್ತಿತ್ತು. ಹಾಗಾಗಿ ಅಪ್ಪನ ಜೊತೆ ವರ್ಷಕ್ಕೆ ಒಂದು ಸಲ ಮೈಸೂರಿಗೆ ಹೋಗೋ ಅವಕಾಶ ನನಗೆ ಸಿಗ್ತಿತ್ತು. ಅದ್ನ ನಾನು ಯಾವತ್ತೂ ತಪ್ಪಿಸಿಕೊಳ್ತಿರ್ಲಿಲ್ಲ.. ಇನ್ನು ಈ ಜಾತ್ರೆಗೆ ಅಂತ ಬಂದಿರ್ತವಲ್ಲಾ, ವಿಶೇಷ ಅಂಗಡಿಗಳು, ಇದೂ ನಮ್ಮ ಆಕರ್ಷಣೆಯ ಕೇಂದ್ರವೇ...ಆ ವರ್ಷ ಏನು ಹೊಸ ಆಟಿಕೆಗಳು ಬಂದಿವೆ, ಯಾವುದನ್ನ ಪಚರ್ೇಸ್ ಮಾಡೋದು...ಯಾವ ಅಂಗಡಿಯಿಂದ ಕಡ್ಲೆಪುರಿ ಎಗರಿಸೋಕೆ ಸುಲಭ... ಹೀಗೆ ನಮ್ಮದೇ ಆದ ಲೆಕ್ಕಾಚಾರಗಳು ನಡೀತ್ತಿದ್ವು. ಜಾತ್ರೆ ದಿವಸ ಮತ್ತು ಅದರ ಹಿಂದಿನ ದಿವಸ ಬೇರೆ ಬೇರೆ ಇಲಾಖೆಗಳು ಚಿಕ್ಕ ಸ್ಕ್ರಿನ್ ಮೇಲೆ ಸಾಕ್ಷ್ಯಚಿತ್ರಗಳನ್ನ ತೋರಿಸ್ತಿದ್ದವು. ಈಗಿನ ಹಾಗೆ ಆಗ ಟಿವಿಗಳು ಇರಲಿಲ್ಲ...ಹಾಗಾಗಿ ನಮ್ಗೆ ಆವತ್ತೆಲ್ಲಾ ಅದೇ ದೊಡ್ಡ ಮನೋರಂಜನೆ... ಯಾವುದೋ ಸಿನಿಮಾ ನೋಡಿದ ಅನುಭವ! ದಿನಾ ಬೆರಳೆಣಿಕೆಯಷ್ಟು ವಾಹನಗಳನ್ನ ನೋಡ್ತಿದ್ದ ನಮ್ಗೆ, ಜಾತ್ರೆಗೆ ಹರಿದು ಬರ್ತಿದ್ದ ವಾಹನಗಳ ಸಾಲು, ಕೆಎಸ್ಆರ್ಟಿಸಿಯ ವಿಶೇಷ ಬಸ್ಗಳನ್ನ ಕಣ್ತುಂಬಿಸಿಕೊಳ್ಳೋದು ಒಂದು ಹಬ್ಬವೇ... ಭಾಗಮಂಡಲದಲ್ಲಿ ಆಗ ಇನ್ನೂ ಪೂರ್ಣ ಪ್ರಮಾಣದ ಪೊಲೀಸ್ ಸ್ಟೇಷನ್ ಬಂದಿರ್ಲಿಲ್ಲ.. ಒಂದು ಔಟ್ ಪೋಸ್ಟ್ ಇತ್ತಷ್ಟೇ... ಅಲ್ಲಿದ್ದಿದ್ದು ಒಬ್ಬ ಮುಖ್ಯಪೇದೆ, ಎರಡೋ, ಮೂರೋ ಪೊಲಿಸ್ರು. ಇಂಥ ಊರು, ಜಾತ್ರೆ ದಿನ ಖಾಕಿ ಸಮುದ್ರವೇ ಆಗಿಬಿಡ್ತಿತ್ತು. ಸಾಕ್ಷಾತ್ ಎಸ್ಪಿ ಸಾಹೇಬ್ರೇ ಬಂದಿರ್ತಿದ್ರು. ನಮ್ಮ ಮನೆ ಹಿಂದೆನೇ ಪೊಲೀಸ್ ಔಟ್ ಪೋಸ್ಟ್ ಇದ್ದಿದ್ದು. ಮುಖ್ಯಪೇದೆ ಯಾವಾಗ್ಲೂ ಕಾಲು ಮೇಲೆ ಕಾಲು ಹಾಕಿ ಕೂತ್ಕೊಳ್ತಿದ್ದ ಕುಚರ್ೀಲಿ ಎಸ್ಪಿ ಕೂತರ್ಿದ್ರು. ಅಲ್ಲಿಂದಲೇ ಪೊಲೀಸ್ರಿಗೆ, ಹೋಂಗಾಡ್ಸರ್್ಗೆ ಎಲ್ಲೆಲ್ಲಿ ಕೆಲಸ ಮಾಡ್ಬೇಕು ಅನ್ನೋ ಜವಾಬ್ದಾರಿ ಕೊಡಲಾಗ್ತಿತ್ತು. ಫೈರ್ ಎಂಜಿನ್ನವ್ರೂ ಇರ್ತಿದ್ರು. ಇದನ್ನೆಲ್ಲಾ ನಾವು ಬಿಟ್ಟ ಕಣ್ಣು ಬಿಟ್ಟ ಹಾಗೇ ನೋಡ್ತಿದ್ವಿ.
ಇವತ್ತು ಭಾಗಮಂಡಲ ಜಾತ್ರೆ.. ಈಗ ಭಾಗಮಂಡಲ, ತಲಕಾವೇರಿ ದೇವಾಸ್ಥಾನಗಳು ಹೊಸತನದಿಂದ ನಳನಳಿಸ್ತಿವೆ. ಬರೋ ಭಕ್ತರ ಸಂಖ್ಯೆನೂ ಜಾಸ್ತಿ ಆಗಿದೆ. ಈಗ ಅಲ್ಲಿ ನಮ್ಮ ಜಾಗಕ್ಕೆ ಮತ್ತೊಂದು ತಲೆ ಮಾರು ಬಂದು ಕೂತಿದೆ. ಅದೇ ಮುಗ್ಧತೆ, ಅದೇ ಕಾತುರದ ಕಣ್ಣುಗಳಿಂದ ಜಾತ್ರೆಯನ್ನ ಅನುಭವಿಸೋಕೆ ರೆಡಿಯಾಗಿದೆ....

No comments: